Bhartiya Bhasha, Siksha, Sahitya evam Shodh
ISSN 2321 - 9726 (Online) New DOI : 10.32804/BBSSES
**Need Help in Content editing, Data Analysis.
Adv For Editing Content
ಷಟಸ್ಥಲ ಸಿದ್ದಾಂತದ ಹಿರಿಮೆ ( DIGNITY OF SIX STAGES THEORY IN VACHANAS )
1 Author(s): SRI. MALLIKARJUN KANNESHWAR
Vol - 2, Issue- 1 , Page(s) : 43 - 47 (2011 ) DOI : https://doi.org/10.32804/BBSSES
ಕನ್ನಡನಾಡಿನಲ್ಲಿ ಹನ್ನೆರಡನೆಯ ಶತಮಾನದಲ್ಲಿ ಆಧ್ಯಾತ್ಮಿಕ ಸುಗ್ಗಿಯ ಕಾಲವು ಗತಿಸಿ ಹೋಗಿದ್ದು ಇತಿಹಾಸದಲ್ಲಿ ಚಿರಸ್ಮರಣೀಯವಾಗಿದೆ. ಆಗ ಬಸವಾದಿ ಶ್ರೇಷ್ಠ ಶಿವಶರಣರು ಕರ್ನಾಟಕದ ಸಾಹಿತ್ಯ, ಸಮಾಜ, ಧರ್ಮ, ಸಂಸ್ಕøತಿಗಳ ಸರ್ವಾಂಗೀಣ ಉನ್ನತಿಯನ್ನುಂಟುಮಾಡಿದರು. ಅಂದು ಸಮಗ್ರ ನಾಡಿನ ಜೀವನವು ಉನ್ನತ ಮಟ್ಟಕ್ಕೆ ಏರಿತು. ಮೇಲು-ಕೀಳು ಇಲ್ಲದ, ಸೋದರಭಾವದ ಸ್ವಭಾವದ ಸಮಾಜರಚನೆ, ಭಕ್ತಿ ಪ್ರಧಾನವಾದ ಧರ್ಮ ಪ್ರಚಾರ, ನೀತಿ-ಸದಾಚಾರಗಳ ಪ್ರತಿಪಾದನೆ, ವ್ಯಕ್ತಿಯ ಹಾಗೂ ಸಮಾಜದ ಉದ್ದಾರ ಮೊದಲಾದ ಉದಾತ್ತ ಉದ್ದೇಶಗಳು ಆಗಿನ ಶಿವಶರಣರ ಮುಂದೆ ಇದ್ದುವು. ಆಗ ಕೇವಲ ಒಂದು ಮತ ಪ್ರಸಾರವು ಗುರಿಯಾಗಿರದೆ, ಮಾನವಕುಲದ ಉದ್ಧಾರವೇ ಅವರ ಹಿರಿಯ ಗುರಿಯಾಗಿತ್ತು. ಇದನ್ನು ಸಾಧಿಸುವಾಗ ಸಾಮಾನ್ಯ ಜನತೆಗೆ ಶಿವಶರಣರು ಬೋಧಿಸಬೇಕಾಗಿತ್ತು. ಆ ಬೋಧನೆಯ ಪರಿಣಾಮವಾಗಿ ಶಿವಶರಣರ ವಚನಗಳು ಉದಯವಾಗಿ, ಕನ್ನಡಸಾಹಿತ್ಯದ ಶ್ರೀಮಂತಿಕೆ ವರ್ಧಿಸಿತು, ಶ್ರೀ ಎಂ. ಆರ್. ಶ್ರೀಯವರು ಹೇಳಿದಂತೆ- “ ವಚನಗಳು ಕನ್ನಡ ನಾಡಿನ ಉಪನಿಷತ್ತುಗಳು, ವಚನಕಾರರು ಕರ್ನಾಟಕದ ರಸಋಷಿಗಳು.” ನೀತಿ, ತತ್ವಜ್ಞಾನ ಹಾಗೂ ಕಾವ್ಯ ಇವುಗಳ ತ್ರಿವೇಣೀಸಂಗಮವನ್ನು ನಾವು ವಚನಸಾಹಿತ್ಯದಲ್ಲಿ ಕಾಣುತ್ತೇವೆ. ಡಾ. ರಂ ಶ್ರೀ. ಮುಗಳಿಯವರು ಹೇಳಿದಂತೆ- “ವಚನ ಸಾಹಿತ್ಯ ಪಾಂಡಿತ್ಯಪ್ರತಿಭೆಗಳ ಸಂಯೋಗದಿಂದ ಉಂಟಾದ ಗ್ರಂಥ ಸಾಹಿತ್ಯವಲ್ಲ; ಅನುಭಾವಿಗಳ ಆತ್ಮಮಥನದಿಂದ ಹೊರಹೊಮ್ಮಿದ ಮಥನ ಸಾಹಿತ್ಯ”ಎಂದರು. ಈ ಕಾಲದಲ್ಲಿ ಚೆನ್ನ ಬಸವಣ್ಣನವರು ವಿಶೇಷವಾಗಿ ಷಟಸ್ಥಲಸಿದ್ದಾಂತವನ್ನು ವಿವರವಾಗಿ ನಿರೂಪಿಸಿ ಮಹದುಪಕಾರ ಮಾಡಿದ್ದಾರೆ. ಮಹಾದಾರ್ಶನಿಕರಾದ ಚೆನ್ನಬಸವಣ್ಣನವರು ಈ ಸಿದ್ಧಾಂತವನ್ನು ಪ್ರತಿಪಾದಿಸಿ “ಷಟಸ್ಥಲ ಸಿದ್ಧಾಂತ ಚಕ್ರವರ್ತಿ”ಎನಿಸಿದರು.